ಭಾನುವಾರ, ಆಗಸ್ಟ್ 28, 2011

ಖಾಲಿಯಾದ ಜೋಗಯ್ಯನ ಜೋಳಿಗೆ..:’(

 
      "ಪ್ರತಿಯೊಬ್ಬ ಮಹಾಪುರುಷನ ಹಿಂದೆ ಒಬ್ಬಳು ಸ್ತ್ರೀ ಇದ್ದೇ ಇರುತ್ತಾಳೆ" ಆಹಾ..!! ಆಹಾ..!! ಎಂಥಾ ಮಾತು..?? ಮುತ್ತಿನಂತ ಮಾತು. ಈವಾಗ ಜನರಾಡುವ ಮಾತು "ಅದೇ "ಮಹಾ"ಪುರುಷನ ಜೊತೆ ಸ್ತ್ರೀ ಇದ್ದರೆ!!?? ಅವನು ಸಿ.ಡಿ. ಲಿರ್ತಾನೆ!!!" ಛೀ...!! ಛೀ...!! ಎಂತಾ ಮಾತು...?? ಮುತ್ತಿಗೆ ಕಲ್ಲೆಸೆಯುವ ಮಾತು..! ಅಂತಿಂಥಾ ಕಲ್ಲಲ್ಲಾ ರೀ...! ಛಪಡಿ ಕಲ್ಲು. ಎಸದ್ಮೇಲೆ  ಎದ್ದೇಳ್ಬಾರ್ದು. ಏನು ಮಾಡೋದು ಸಾಮಿ?? ಈಗಿನ ಕಾಲವೇ ಅಂತದ್ದು. ಎಲ್ಲವೂ ಸ್ತ್ರೀ ಶಕ್ತಿಯ ಮಹಿಮೆಯೇ...!!

                                               ***************************

             ಬೇಕಿತ್ತಾ?? ಬೇಕಿತ್ತಾ?? ಈ ಪಾಟಿ ರಾಮಾಯಣ. ನೆಟ್ಟಗೆ "ಬನ್ನಿ ಸಾಮಿ, ನಮ್ಮ ಶಿವಣ್ಣೋರ ನೂರನೇ ಸಿನಿಮಾ ಬಿಡುಗಡೆ ಆಗ್ತೈತೆ. ನೋಡಿ ಖುಸಿ ಪಟ್ಟು, ನಮ್ಗೆ ಹಾರೈಸಿ" ಅಂತ ಅನ್ನೋದ ಬಿಟ್ಟು, ವಾರದ ಮೊದಲೇ ಟಿಕೇಟ್ ಮಾರಾಟಕ್ಕಿಟ್ಟು.. ಇವಾಗ ಕುಂಯ್ಯೋ... ಮುರ್ರೋ... ಅಂದ್ರೆ ಕೇಳೋರ್ಯಾರು?? ನೋಡೋರ್ಯಾರು??
                 
           ಹೆಂಗೋ ಒದ್ದಾಡಿ. ಬಿದ್ದಾಡಿ, ಜಗ್ಗಾಡಿ... ಬ್ಲಾಕ್ ಲಿ ಖರೀದಿ ಮಾಡಿ, ಪೋಲಿಸಣ್ಣನ ಕೈಲಿ ಲಾಟಿ ರುಚಿ ನೋಡಿ ಟಿಕಿಟ್ ತಕಂಡು, ಥಿಯೇಟ್ರಾನಾಗ ಕುತ್ಗಂಡಿ ನೋಡೋಕಾಗ್ದೆ, ಅರ್ಥ ಆಗ್ದೇ, ತಲೆನ ಪರ-ಪರ ಕೆರ್ಕಂಡಿ, ಮದ್ಯೆ-ಮದ್ಯೆ ಸೊಳ್ಳೆ, ತಿಗಣೆ ಕಾಟಕ್ಕೂ ಮೈಯೆಲ್ಲಾ ಪರಚ್ಗೋಳ್ತಾ.... ಎದ್ದುಬಂದು, ಕಷ್ಟಪಟ್ಟು ಗಳಿಸಿರೋ ದುಡ್ಡು ಏನೂ ಪ್ರಯೋಜನಕ್ಕಿಲ್ದೇ, ಯಾರ್ದೋ ಕಿಸೆ ಸೇರ್ತಲ್ಲಾ ಅನ್ನೋ ನೋವಿಗೆ ನಾಲ್ಕು ಮಾತು ಆಡಿರ್ತಾರೆ! ಆ ಮಾತಿಗೆ..."ಅಯ್ಯೋ ಜನ ಇಷ್ಟಪಡೋಹಂಗೆ ನನ್ಹತ್ರ ಮಾಡೋಕಾಗಿಲ್ವಲ್ಲಾ.." ಅಂತ ತಪ್ಪನ್ನ ತಿದ್ಕಳೋದು ಬಿಟ್ಟು, ಮಕಾಡೆ ಮಲಗಿ... "ಜನ್ರೇ ಸರಿಇಲ್ಲಾ" ಅಂದ್ಬಿಟ್ರೆ..?? ಜೋಗಯ್ಯನ ಜೋಳ್ಗಿಗೆ ಹಾಕಿರೋ ಕಾಸು.. ಬಂದ್ಬಿಡ್ತದಾ?? ವಸಿ ನೀನೆ ಹೇಳು ಮಗಾ...
      
        ನಮ್ಮ "ಅಣ್ಣಾ" ಅಣ್ಣೋರ ಗಾಳಿ ಇಷ್ಟು ಜೋರಾಗಿ ಬೀಸುತ್ತಿರುವಾಗ, ಕಳ್ ರಾಜಕಾರಣಿಗಳೆಲ್ಲಾ " ಹಯ್ಯೋ ದೇವ್ರೆ... ತಲೆ ವೊಡ್ದು ಗಳ್ಸಿರೋ ದುಡ್ಡೆಲ್ಲಾ ಯಾವಾಗ ಹೊರಬಿದ್ದೋಗ್ಬಿಡುತ್ತೋ!!?" ಅನ್ನುತ್ತಾ... ದೇವ್ರಿಗೆ ಆರ್ತಿ ಎತ್ತುತ್ತಾ, ಹುಂಡಿ ತುಂಬಿಸುತ್ತಿರುವಾಗ, ಆ ದುಡ್ಡನ್ನೆಲ್ಲಾ ಲೆಕ್ಕ ಮಾಡ್ತಾ, ಬಿಜಿಯಾಗಿರುವಾಗ.... ಇವ್ರ ಮದ್ಯೆ, ನಾಲ್ಕು ಕಾಸು ಮಾಡ್ಕಂತೀನಿ ಅಂತ ಆಸೆ ಮಾಡ್ಕಂಡು "ಪ್ರೇಮ" ಗೀತೆ ಹಾಡ್ಬಿಟ್ರೆ.... ಲಕ್ಷ್ಮಿ ವಲಿತಾಳ ಸಾಮಿ???

          "ತತ್ತಾರ್ಲಾ ಇಲ್ಲಿ... ನಿತ್ಯಾನಂದನ ಸೀಡಿ ನೇ;  ಈ ಪಿಚ್ಛರ್ಗಿಂತ ಆ ನಿತ್ಯ ಆನಂದ ಕೊಡಾ ಅದೇ ಎಷ್ಟೋ ವಾಸಿ ಕಣ್ಲಾ...!! "  ಅನ್ನೋ ಮಾತು ಬರೋ ಈ ಕಾಲ್ದಲ್ಲಿ, ಮಚ್ಚು ಹಿಡಿದು "ಪೀಸು" ಕತ್ತರ್ಸೋ ಸೀನು ಇದ್ದಿದ್ರೆ....!! ಆವಾಗಿನ ಕಥೆಯೇ ಬೇರೇ ಇರ್ತಿತ್ತೇನೋ??? 
                                     ***********************************
 
       ಏನೇ ಇರ್ಲಿ.... ನಮ್ಮ "ಅಣ್ಣಾ" ಅಣ್ಣೋರ್ಗೆ ಜಯಸಿಗ್ತು..."ಸತ್ಯಕ್ಕೆ ಸಾವಿಲ್ಲ, ಸುಳ್ಳನ್ನ ಕಟ್ಗಂಡ್ರೆ ಛಪಡಿ ಕಲ್ಲು ಮೈ-ಮೇಲೆ" ಅನ್ನೋ ಮಾತು ಮತ್ತೆ ಸಾಬೀತಾಯ್ತು... ಜಯ್ ಹಿಂದ್.... :)


1 ಕಾಮೆಂಟ್‌: